ಆದರೆ ಏನು ಮಾಡೋದು ? ಇಪ್ಪತ್ತು ವರ್ಷಗಳಿಂದ ಜಡ್ಡು ಹಿಡಿದು ಕುಳಿತ ಇಲಾಕೆಯನ್ನು ಈಗ ಎಚ್ಚರಿಸುವ ಅದರ ಮೂಲಕ ಸಾರ್ವಜನಿಕ ಉಪಯೋಗಿ ಇಲಾಕೆಯನ್ನಾಗಿಸುವ ನಿರ್ದೇಶಕಿಯ ಶ್ರಮವನ್ನು ಬುದ್ಧಿಮತ್ತೆಯನ್ನು ಮೆಚ್ಕಾಬೇಕಾಗಿದೆಯಾದರು ಇಲಾಕಾ ಅಧಿಕಾರಿಗಳು ನಿರ್ದೇಶಕರ ವೇಗಕ್ಕೆ ತಕ್ಕಂತೆ ನಡೆಯುವಲ್ಲಿ (ನಡೆಯಲು ಆದರು ತಮ್ಮೆಲ್ಲಾ ಹುಳುಕುಗಳು ಬಯಲಿಗೆ ಬರುತ್ತವೆಂಬ ಭಯದಿಂದ) ಹಿನ್ನಡೆ ತೋರುತ್ತಿರುವುದು ಶಂಕರ್ ನಾಗ್ ರವರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಹಾಡನ್ನು ಜ್ಞಾಪಿಸುತ್ತದೆ.
ಹೊಸದಾಗಿ ಬಂದ ನಿರ್ದೇಶಕರನ್ನು ದುಡ್ಡಿನಿ೦ದಲೋ, ಶಿಫಾರಸ್ಸಿನಿ೦ದಲೋ ಅಥವಾ ಇನ್ನ್ಯಾವುದೋ ದೌರ್ಬಲ್ಯದಿ೦ದಲೋ ಇಲ್ಲಿಯವರೆಗೆ ನಿಯಂತ್ರಣದಲ್ಲಿ ಇಟ್ಟುಕೊ೦ಡಿರುತ್ತಿದ್ದ ಅಧಿಕ್ಷರುಗಳು, ಈ ಹೊಸ ನಿರ್ದೇಶಕರನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಲು ಮಾರ್ಗ ಹುಡುಕಿ ಹುಡುಕಿ ಸಾಕಾಗಿದ್ದಾರೆ.
ತನ್ನ ಕೈಕೆಳಗಿನ ಅಧಿಕಾರಿಗಳ ವರ್ತನೆಗೆ ನಿರ್ದೇಶಕರು ಬೇಸರ ಪಡಬೇಕಾಗಿಲ್ಲ. ಕಾರಣ ಇಲಾಕಾ ಅಧಿಕಾರಿಗಳಲ್ಲಿ ನಿರ್ದೇಶಕರನ್ನು ಈ ಕೆಳಕಂಡ ವಿಧಾನಗಳ ಮೂಲಕ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡುವುದು ಸರ್ವೇ ಸಾಮಾನ್ಯ. ಆ ಮಾರ್ಗಗಳು ಇಂತಿವೆ:
೧. ನಿರ್ದೇಶಕರಿಂದ ನ್ಯಾಯಾಲಯಕ್ಕೆ/ಸರ್ಕಾರಕ್ಕೆ/ಇತರೆ ಪ್ರಾಧಿಕಾರಗಳಿಗೆ ತಪ್ಪು ಮಾಹಿತಿ ನೀಡಿ ಪತ್ರ ಬರೆಸುವುದರ ಮೂಲಕ
೨. ನಿರ್ದೇಶಕರಿಗೆ ಹಣದ ಆಮಿಷ ತೋರಿಸುವುದರ ಮೂಲಕ
೩. ನಿರ್ದೇಶಕರಿಗೆ ರಾಜಕಾರಣಿಗಳ ಮೂಲಕ ಒತ್ತಡ
೪. ನಿರ್ದೇಶಕರಿಗೆ ಇಲಾಕೆಯ ಹುಳುಕುಗಳನ್ನು ತೋರಿಸಿ ಹೆದರಿಸುವುದರ ಮೂಲಕ
೫. ಈ ಇಲಾಕೆಯಲ್ಲಿ ನನ್ನ ಕೈಕೆಳಗಿನ ಅಧಿಕಾರಿಗಳ ಜೊತೆಯಲ್ಲಿ ಹೆಣಗುವುದು ಸಾಕಪ್ಪ ಎಂಬ ಭಾವನೆ/ಡಿಪ್ರೆಶನ್ ನಿರ್ದೇಶಕರಲ್ಲಿ ಮೂಡುವಂತೆ ವರ್ತನೆ ಮಾಡುವುದರ ಮೂಲಕ ಹಾಗು ಇತರೆ ಮಾರ್ಗಗಳ ಮೂಲಕ
ಈಗ ಈ ಇಲಾಕೆಯಲ್ಲಿ ನನ್ನ ಕೈಕೆಳಗಿನ ಅಧಿಕಾರಿಗಳ ಜೊತೆಯಲ್ಲಿ ಹೆಣಗುವುದು ಸಾಕಪ್ಪ ಎಂಬ ಭಾವನೆ/ಡಿಪ್ರೆಶನ್ ನಿರ್ದೇಶಕರಲ್ಲಿ ಮೂಡುವಂತೆ ಅಧಿಕಾರಿಗಳು ವರ್ತಿಸುತ್ತಿದ್ದು ಇದು ಬೇಕೆಂದೇ ಅವರು ಆಡುತ್ತಿರುವ ನಾಟಕ ಆಗಿದೆ.
ಆದಕಾರಣ ನಿರ್ದೇಶಕರು ಇದನ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ತನ್ನ ಕೆಲಸದಲ್ಲಿ ತಾನು ಮುಂದುವರೆದರೆ ಅದರಿಂದ ಕೋಟ್ಯಾಂತರ ಜನಕ್ಕೆ ಉಪಯೋಗವಾಗುತ್ತದೆ ಎಂಬ ಭಾವನೆ ನನ್ನದು.
"The future belongs to those who believe in the beauty of their dreams."
No comments:
Post a Comment