Sunday, November 27, 2011

ವೇತನ ತಾರತಮ್ಯ: ತರಗತಿ ಬಹಿಷ್ಕರಿಸಲು ನಿರ್ಧಾರ !

ಬೆಂಗಳೂರು: ವೇತನ ತಾರತಮ್ಯ ಸರಿಪಡಿಸದ ಸರ್ಕಾರದ ಧೋರಣೆಯನ್ನು ಖಂಡಿಸಿ ಡಿಸೆಂಬರ್ 8ರಿಂದ ಅನಿರ್ದಿಷ್ಟ ಕಾಲ ತರಗತಿಗಳನ್ನು ಬಹಿಷ್ಕರಿಸಲು ಪದವಿಪೂರ್ವ ಕಾಲೇಜು ಉಪನ್ಯಾಸಕರು ತೀರ್ಮಾನಿಸಿದ್ದಾರೆ.

ಶಾಸಕರ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಪ್ರಾಂಶುಪಾಲರ ಸಂಘ ಮತ್ತು ಸಮನ್ವಯ ಸಮಿತಿಯ ಪದಾಧಿಕಾರಿಗಳು, ಉಪನ್ಯಾಸಕರ ಸಭೆಯಲ್ಲಿ ರಾಜ್ಯದಾದ್ಯಂತ ತರಗತಿಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ.

ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಉಪನ್ಯಾಸಕರ ವೇತನದ ನಡುವೆ ತಾರತಮ್ಯ ಇದೆ. ಇದನ್ನು ಸರಿಪಡಿಸುವಂತೆ ಒಂದು ವರ್ಷದಿಂದ ಮನವಿ ಮಾಡುತ್ತಿದ್ದರೂ, ಸರ್ಕಾರ ಸ್ಪಂದಿಸದ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಕಾರ್ಯಾಧ್ಯಕ್ಷ ಎಚ್.ಎಸ್.ಪ್ರಕಾಶ್, ಕಾರ್ಯದರ್ಶಿ ಶಕೀಲ್ ಅಹ್ಮದ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ, ವಿಟಿಯು ಸಿಂಡಿಕೇಟ್ ಸದಸ್ಯ ಎನ್.ಅಪ್ಪಾಜಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಮೂಲ ವೇತನ 11,400 ರೂಪಾಯಿ ಇದ್ದರೆ, ಪದವಿ ಕಾಲೇಜು ಉಪನ್ಯಾಸಕರ ಮೂಲ ವೇತನ 21,600 ರೂಪಾಯಿ ಇದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸುವಂತೆ ಅವರು ಆಗ್ರಹಿಸಿದ್ದಾರೆ.

Prajavani Dialy, dated 28.11.2011

Please click on the thread to read it http://www.prajavani.net/web/include/story.php?news=52370&section=3&menuid=10

ನೋಡಿ ಸ್ವಾಮಿ ನಾವಿರೋದು ಹೀಗೆ -ನಿರ್ದೇಶಕರ ಕೈಕೆಳಗಿನ ಅಧಿಕಾರಿಗಳ ಒಕ್ಕೊರಲಿನ ದನಿ

ನಿನ್ನೆ ನಾನು ಪದವಿ ಪೂರ್ವ ಶಿಕ್ಷಣ ಇಲಾಕೆಗೆ ಬಂದಾಗ ತಿಳೀತು ಹೊಸ ನಿರ್ದೇಶಕರು ತಮ್ಮ ಕೈಕೆಳಗಿನ ಎಲ್ಲಾ ಅಧಿಕಾರಿಗಳನ್ನು ಸಾರ್ವಜನಿಕ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಲು ಹುರಿದು೦ಬಿಸುತ್ತಿದ್ದಾರೆ ಮತ್ತು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಅಂತಾ.
ಆದರೆ ಏನು ಮಾಡೋದು ? ಇಪ್ಪತ್ತು ವರ್ಷಗಳಿಂದ ಜಡ್ಡು ಹಿಡಿದು ಕುಳಿತ ಇಲಾಕೆಯನ್ನು ಈಗ ಎಚ್ಚರಿಸುವ ಅದರ ಮೂಲಕ ಸಾರ್ವಜನಿಕ ಉಪಯೋಗಿ ಇಲಾಕೆಯನ್ನಾಗಿಸುವ ನಿರ್ದೇಶಕಿಯ ಶ್ರಮವನ್ನು ಬುದ್ಧಿಮತ್ತೆಯನ್ನು ಮೆಚ್ಕಾಬೇಕಾಗಿದೆಯಾದರು ಇಲಾಕಾ ಅಧಿಕಾರಿಗಳು ನಿರ್ದೇಶಕರ ವೇಗಕ್ಕೆ ತಕ್ಕಂತೆ ನಡೆಯುವಲ್ಲಿ (ನಡೆಯಲು ಆದರು ತಮ್ಮೆಲ್ಲಾ ಹುಳುಕುಗಳು ಬಯಲಿಗೆ ಬರುತ್ತವೆಂಬ ಭಯದಿಂದ) ಹಿನ್ನಡೆ ತೋರುತ್ತಿರುವುದು ಶಂಕರ್ ನಾಗ್ ರವರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಹಾಡನ್ನು ಜ್ಞಾಪಿಸುತ್ತದೆ.

ಹೊಸದಾಗಿ ಬಂದ ನಿರ್ದೇಶಕರನ್ನು ದುಡ್ಡಿನಿ೦ದಲೋ, ಶಿಫಾರಸ್ಸಿನಿ೦ದಲೋ ಅಥವಾ ಇನ್ನ್ಯಾವುದೋ ದೌರ್ಬಲ್ಯದಿ೦ದಲೋ ಇಲ್ಲಿಯವರೆಗೆ ನಿಯಂತ್ರಣದಲ್ಲಿ ಇಟ್ಟುಕೊ೦ಡಿರುತ್ತಿದ್ದ ಅಧಿಕ್ಷರುಗಳು, ಈ ಹೊಸ ನಿರ್ದೇಶಕರನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಲು ಮಾರ್ಗ ಹುಡುಕಿ ಹುಡುಕಿ ಸಾಕಾಗಿದ್ದಾರೆ.

ತನ್ನ ಕೈಕೆಳಗಿನ ಅಧಿಕಾರಿಗಳ ವರ್ತನೆಗೆ ನಿರ್ದೇಶಕರು ಬೇಸರ ಪಡಬೇಕಾಗಿಲ್ಲ. ಕಾರಣ ಇಲಾಕಾ ಅಧಿಕಾರಿಗಳಲ್ಲಿ ನಿರ್ದೇಶಕರನ್ನು ಈ ಕೆಳಕಂಡ ವಿಧಾನಗಳ ಮೂಲಕ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡುವುದು ಸರ್ವೇ ಸಾಮಾನ್ಯ. ಆ ಮಾರ್ಗಗಳು ಇಂತಿವೆ:
೧. ನಿರ್ದೇಶಕರಿಂದ ನ್ಯಾಯಾಲಯಕ್ಕೆ/ಸರ್ಕಾರಕ್ಕೆ/ಇತರೆ ಪ್ರಾಧಿಕಾರಗಳಿಗೆ ತಪ್ಪು ಮಾಹಿತಿ ನೀಡಿ ಪತ್ರ ಬರೆಸುವುದರ ಮೂಲಕ
೨. ನಿರ್ದೇಶಕರಿಗೆ ಹಣದ ಆಮಿಷ ತೋರಿಸುವುದರ ಮೂಲಕ
೩. ನಿರ್ದೇಶಕರಿಗೆ ರಾಜಕಾರಣಿಗಳ ಮೂಲಕ ಒತ್ತಡ
೪. ನಿರ್ದೇಶಕರಿಗೆ ಇಲಾಕೆಯ ಹುಳುಕುಗಳನ್ನು ತೋರಿಸಿ ಹೆದರಿಸುವುದರ ಮೂಲಕ
೫. ಈ ಇಲಾಕೆಯಲ್ಲಿ ನನ್ನ ಕೈಕೆಳಗಿನ ಅಧಿಕಾರಿಗಳ ಜೊತೆಯಲ್ಲಿ ಹೆಣಗುವುದು ಸಾಕಪ್ಪ ಎಂಬ ಭಾವನೆ/ಡಿಪ್ರೆಶನ್ ನಿರ್ದೇಶಕರಲ್ಲಿ ಮೂಡುವಂತೆ ವರ್ತನೆ ಮಾಡುವುದರ ಮೂಲಕ ಹಾಗು ಇತರೆ ಮಾರ್ಗಗಳ ಮೂಲಕ

ಈಗ ಇಲಾಕೆಯಲ್ಲಿ ನನ್ನ ಕೈಕೆಳಗಿನ ಅಧಿಕಾರಿಗಳ ಜೊತೆಯಲ್ಲಿ ಹೆಣಗುವುದು ಸಾಕಪ್ಪ ಎಂಬ ಭಾವನೆ/ಡಿಪ್ರೆಶನ್ ನಿರ್ದೇಶಕರಲ್ಲಿ ಮೂಡುವಂತೆ ಅಧಿಕಾರಿಗಳು ವರ್ತಿಸುತ್ತಿದ್ದು ಇದು ಬೇಕೆಂದೇ ಅವರು ಆಡುತ್ತಿರುವ ನಾಟಕ ಆಗಿದೆ.
ಆದಕಾರಣ ನಿರ್ದೇಶಕರು ಇದನ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ತನ್ನ ಕೆಲಸದಲ್ಲಿ ತಾನು ಮುಂದುವರೆದರೆ ಅದರಿಂದ ಕೋಟ್ಯಾಂತರ ಜನಕ್ಕೆ ಉಪಯೋಗವಾಗುತ್ತದೆ ಎಂಬ ಭಾವನೆ ನನ್ನದು.

"The future belongs to those who believe in the beauty of their dreams."
~ Eleanor Roosevelt